ಮಂಗಳೂರೆಂಬ ನಗದದೊಳಗೆ ಲಾಲ್ ಬಾಗ್ ಎಂಬ ಕಮರ್ಸಿಯಲ್ ಜಾಗ.ಕೇಳಿತು ಕೇಳದಂತೆ ತನ್ನದೇ ಲೋಕದಲ್ಲಿ ವಿಹರಿಸುವಷ್ಟು ವಿಸ್ಮಯಿಸುವ ತಾಣ.ಈ ಮಧ್ಯೆ ಮಾನವೀಯ ತೆ ಮರೆದ ಅಪರಿಚಿತ ರೋರ್ವರ ಕಥೆ ಇಂದಿನ ಸತ್ಯಕಥೆಯಲದಲಿ
ಅದು ಸಾಯಂಕಾಲ ಸೂರ್ಯ ಮುಳುಗುವ ಹೊತ್ತು .ಎಲ್ಲರೂ ಕೆಲಸ ಬಿಟ್ಟು ಮನೆ ಸೇರುವ ಸಮಯ. ಕೆಲವರು ತಮ್ಮ ಸ್ವಂತ ವಾಹನದಲ್ಲಿ ಇನ್ನೂ ಕೆಲವರು ಬಸ್ಸಿನಲ್ಲಿ ಪ್ರಯಾಣ ಮಾಡುವ ತವಕ ಬೇರೆ. ಈ ನಡುವೆ ಮಾರ್ಗದ ಬದಿಯಲ್ಲಿ ದಿಕ್ಕಿಲ್ಲದೆ ಬಿಕ್ಷುಕನಂತೆ ಇರುವ ವ್ಯಕ್ತಿ ನಡೆಯಲಾಗದೆ ಲೇಡಿಹಿಲ್ ನಲ್ಲಿ ಕುಳಿತ್ತಿದ್ದರು.ಅದೇ ಸಮಯದಲ್ಲಿ ಶಾಂಪಿಂಗ್ ಮುಗಿಸಿ ಸುಮಾರು 40 ರ ಆಸುಪಾಸಿನ ವ್ಯಕ್ತಿಯೋರ್ವರು ಆಟೋದಲ್ಲಿ ಬಂದು ಇಳಿದು ಬೊಬೈಲಿನಲ್ಲಿ ಎನೋ ಹುಡುಕಾಡುತ್ತಿದ್ದರು.ಇದೇ ಸಮಯಕ್ಕೆ ನೆಲದಲ್ಲಿ ಜಾರಿಕೊಂಡು ಬೇರ ಕಡೆಗೆ ಹೋಗಲು ತಡುಕಾಡುತ್ತಿರುವ ವಯೊವೃದ್ಧ ಕಣ್ಣಿಗೆ ಬಿದ್ದರು. ಸುಮಾರು ಹತ್ತು ನಿಮಿಷದಷ್ಟು ಹಿರಿಯ ಜೀವವನ್ನು ಗಮನಿಸಿದ ಆತ ಮೆಲ್ಲನೆ ಅವರ ಬಳಿ ಹೋಗಿ ಏನೋ ಮಾತಾಡಿದರು. ಅದು ನನಗೂ ಅರ್ಥವಾಗಲಿಲ್ಲ. ನಾನು ನೋಡುತ್ತಿದ್ದಂತೆಯೇ ಆಟೋ ಡೈವರನ್ನು ಕರೆದು ಈ ವೃದ್ದ ನನ್ನು ಬಸು ನಿಲ್ದಾಣಕ್ಕೆ ಕರೆದೊಯ್ಯುವಂತೆ ಹೇಳಿದ.ಆಟೋ ಚಾರ್ಜು ಜೊತೆಗೆ ಆ
ಹಿರಿಯ ವೃದ್ದನಿಗೆ ಕರ್ಚಿಗೆ ಸ್ವಲ್ಪ ಹಣ,ತನ್ನ ಬಳಿ ಇದ್ದ ನೀರು ಮತ್ತು ತಿನಿಸು ನೀಡಿದರು. ಆಟೊ ಚಾಲಕ ಆಶ್ಚರ್ಯದಿಂದ ನೋಡುತ್ತಿದ್ದ